Slide
Slide
Slide
previous arrow
next arrow

ಗ್ರಾಮೀಣ ಭಾಗದಲ್ಲಿ ಮುಂದುವರೆದ ಕಳ್ಳತನ: ಕ್ರಮಕ್ಕೆ ಆಗ್ರಹ

300x250 AD

ಸಿದ್ದಾಪುರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಣ್ಣಪುಟ್ಟ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು ಇದಕ್ಕೆ ಇಂಬು ನೀಡುವಂತೆ ಹಾರ್ಸಿಕಟ್ಟಾ ಗ್ರಾಪಂವ್ಯಾಪ್ತಿಯಲ್ಲಿ ಬೀದಿ ದೀಪಕ್ಕೆ ಅಳವಡಿಸಿದ ಸೋಲಾರ್ ಲೈಟ್ ಹಾಗೂ ಅದಕ್ಕೆ ಸಂಬಂಧಿಸಿ ಬ್ಯಾಟರಿಗಳು ಕಳ್ಳರ ಪಾಲಾಗಿದೆ.
ಹಾರ್ಸಿಕಟ್ಟಾದ ಕೋಣೆಗದ್ದೆ ಬಸ್ ನಿಲ್ದಾಣದ ಸಮೀಪ ಅಳವಡಿಸಿದ್ದ ಸೋಲಾರ್ ಲೈಟಿಗೆ ಅಳವಡಿಸಿದ ಎಲ್ಲ ಪರಿಕರಗಳನ್ನು ಕಳೆದ ನಾಲ್ಕುದಿನಗಳ ಹಿಂದೆ ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಇದೇ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದ ಹಿಂದೆ ಹೊನ್ನೆಹದ್ದ ಬಸ್ ನಿಲ್ದಾಣ ಸಮೀಪ ಹಾಗೂ ಮಾನಿಹೊಳೆ ಬಸ್ ನಿಲ್ದಾಣದ ಸಮೀಪ ಅಳವಡಿಸಿದ್ದ ಸೋಲಾರ್ ಲೈಟ್ ಗಳನ್ನು ಯಾರೋ ಕದ್ದುಕೊಂಡು ಹೋಗಿದ್ದರು. ಆದರೆ ಇಲ್ಲಿಯವರೆಗೆ ಈ ಕುರಿತು ಗ್ರಾಪಂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗ ಕೋಣೆಗದ್ದೆ ಬಸ್ ನಿಲ್ದಾಣದ ಸಮೀಪ ಇರುವ ಸೋಲಾರ್ ಲೈಟ್ ಕಳ್ಳತನವಾಗಿದ್ದರಿಂದ ಈ ಕುರಿತು ಗ್ರಾಪಂ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕೋಣೆಗದ್ದೆ ಕ್ರಾಸ್‌ನಲ್ಲಿ ಕೂಡಲೇ ಬದಲಿ ರೋಟ್ ಲೈಟ್ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲಮಾಡಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top